Thursday, July 30, 2020
ವಾರದ ವಿಜ್ಞಾನ ಪ್ರಯೋಗಗಳು
Saturday, July 18, 2020
ಮೊಬೈಲ್ ಮತ್ತು ಮನಃಶಾಂತಿ
ಮೊಬೈಲ್ ಮತ್ತು ಮನಃಶಾಂತಿ
ಇಂಟರ್ನೆಟ್ ಸಂಪರ್ಕವಿರುವ ಮೊಬೈಲ್ ಇದೆಯೆಂದ ತಕ್ಷಣ ಅದು ಲೇಟೆಸ್ಟ್ ವೆಬ್ ಸೀರೀಸ್ ನೋಡಲಷ್ಟೇ ಬಳಕೆಯಾಗಬೇಕು ಎಂದೇನೂ ಇಲ್ಲ, ಮನಃಶಾಂತಿಯ ಹುಡುಕಾಟಕ್ಕೂ ಅದು ಮಾರ್ಗದರ್ಶನ ಮಾಡಬಹುದು.
ನಿತ್ಯದ ಬದುಕಿನ ಬಹುತೇಕ ಕೆಲಸಗಳಲ್ಲಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸುವುದು ಇದೀಗ ಸಾಮಾನ್ಯವಾಗಿರುವ ಸಂಗತಿ. ಮನೆಯ ದಿನಸಿ ತರಿಸುವುದಿರಲಿ, ವಿದ್ಯುತ್ ಸಂಪರ್ಕದ ಶುಲ್ಕ ಪಾವತಿಸುವುದಿರಲಿ, ಮುಂದೆಂದೋ ಹೋಗಬಹುದಾದ ಪ್ರವಾಸವನ್ನು ಯೋಜಿಸುವುದೇ ಇರಲಿ - ಎಲ್ಲದಕ್ಕೂ ನಾವು ಈಗ ಮಾಹಿತಿ ತಂತ್ರಜ್ಞಾನದ ಮೊರೆಹೋಗುತ್ತೇವೆ.
ಕೆಲಸಗಳನ್ನು ಸುಲಭವಾಗಿಸುವುದು, ಬೇಕಾದ್ದನ್ನೆಲ್ಲ ಕುಳಿತ ಕಡೆಗೇ ತಂದು ತಲುಪಿಸುವುದು - ಈ ಸವಲತ್ತುಗಳ ವೈಶಿಷ್ಟ್ಯ ಇಷ್ಟಕ್ಕೇ ಸೀಮಿತವೇನಲ್ಲ. ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದನ್ನು, ನಮಗೆ ಅನುಕೂಲವಾದ ಸಮಯವನ್ನು ನಮಗಿಷ್ಟವಾದ ಕೆಲಸಗಳಿಗೆ ವಿನಿಯೋಗಿಸುವುದನ್ನೂ ಇವು ಸಾಧ್ಯವಾಗಿಸಿವೆ. ಮನರಂಜನೆಯಿಂದ ಮನಃಶಾಂತಿಯವರೆಗೆ ನಾವಿಲ್ಲಿ ಯಾವುದರ ಹುಡುಕಾಟದಲ್ಲಾದರೂ ತೊಡಗಿಕೊಳ್ಳಬಹುದು.
ಇವತ್ತಿನ ಜಗತ್ತಿನಲ್ಲಿ ಮಾನಸಿಕ ಒತ್ತಡ ಮಿತಿಮೀರಿರುವುದರಿಂದಲೋ, ಸಹಜವಾಗಿ ಮೂಡಿದ ಕುತೂಹಲದಿಂದಲೋ ಬಹಳಷ್ಟು ಜನ ಆಧ್ಯಾತ್ಮದತ್ತ ಮುಖಮಾಡಿರುವುದನ್ನು ನಾವು ಇದೀಗ ನೋಡಬಹುದು. ಅದರ ಜೊತೆಗೆ ದೈಹಿಕ ಆರೋಗ್ಯವನ್ನೂ ಚೆನ್ನಾಗಿಟ್ಟುಕೊಳ್ಳಲು ಹಲವು ಮಂದಿ ಯೋಗದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಧ್ಯಾನ-ಪ್ರಾಣಾಯಾಮಗಳನ್ನೂ ಮಾಡುತ್ತಿದ್ದಾರೆ.
ಯಾವುದಕ್ಕೂ ಟೈಮೇ ಇಲ್ಲ ಎನ್ನುವ ಜನರು ಈ ಹೊಸ ಆಸಕ್ತಿಗಳಿಗೆ ಸಮಯ ಹೊಂದಿಸುವುದು ಹೇಗೆ? ಮಾಹಿತಿ ತಂತ್ರಜ್ಞಾನದ ಸವಲತ್ತುಗಳು ಈ ಪ್ರಶ್ನೆಗೂ ಉತ್ತರ ಹೇಳುತ್ತಿವೆ.
ಹೌದು, ಟ್ರಾಫಿಕ್ ಜಾಮಿನಲ್ಲಿ ಸಿಲುಕಿರುವ ಬಸ್ಸಿನಲ್ಲಿ ಕುಳಿತಿದ್ದಾಗಲೂ ಆಧ್ಯಾತ್ಮ ಚಿಂತನೆ ಮಾಡುವುದನ್ನು ಸಾಧ್ಯವಾಗಿಸಿದ್ದು ಇದೇ ಮಾಹಿತಿ ತಂತ್ರಜ್ಞಾನ. ಕೈಯಲ್ಲೊಂದು ಮೊಬೈಲು, ಅದಕ್ಕೆ ಅಂತರಜಾಲ ಸಂಪರ್ಕ ಇದ್ದರೆ ಸಾಕು, ಈ ವಿಷಯದ ಬಗ್ಗೆ ಹಲವು ಖ್ಯಾತನಾಮರು ರೂಪಿಸಿರುವ ಸಾಲುಸಾಲು ವೀಡಿಯೊಗಳನ್ನು ಯೂಟ್ಯೂಬಿನಲ್ಲಿ ನೋಡಬಹುದು. ೪೭ ಲಕ್ಷ ಚಂದಾದಾರರಿರುವ ಸದ್ಗುರು, ೮ ಲಕ್ಷ ಚಂದಾದಾರರಿರುವ ಶ್ರೀ ಶ್ರೀ ರವಿಶಂಕರ್ ಮುಂತಾದವರ ಯೂಟ್ಯೂಬ್ ಖಾತೆಗಳನ್ನು ನೋಡಿದರೆ ಈ ಮಾಧ್ಯಮದಲ್ಲಿ ಆಧ್ಯಾತ್ಮ ಕುರಿತ ಮಾಹಿತಿ ಎಷ್ಟು ಜನಪ್ರಿಯವೆನ್ನುವುದು ಅರಿವಾಗುತ್ತದೆ.
ಸಮಯ ಹಾಳುಮಾಡುವ ದಾರಿಯೆಂಬ ಅಪಖ್ಯಾತಿಗೆ ಗುರಿಯಾಗಿರುವ ಫೇಸ್ಬುಕ್ನಲ್ಲೂ ಈ ಕ್ಷೇತ್ರದ ಪ್ರಸಿದ್ಧ ವ್ಯಕ್ತಿಗಳು - ಸಂಸ್ಥೆಗಳು ಸಕ್ರಿಯರಾಗಿದ್ದಾರೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಫೇಸ್ಬುಕ್ ಪುಟವನ್ನು ಇಷ್ಟಪಟ್ಟಿರುವವರ ಸಂಖ್ಯೆ ಇಪ್ಪತ್ತಮೂರು ಲಕ್ಷಕ್ಕೂ ಹೆಚ್ಚು! ಈ ಹಿಂದೆಯೇ ಸಿದ್ಧಪಡಿಸಿದ ಮಾಹಿತಿಯ ಪ್ರಕಟಣೆ ಮಾತ್ರವಲ್ಲದೆ ಫೇಸ್ಬುಕ್ ಹಾಗೂ ಯೂಟ್ಯೂಬ್ ವೇದಿಕೆಗಳು ಹೊಸ ಕಾರ್ಯಕ್ರಮಗಳ ನೇರಪ್ರಸಾರಕ್ಕೂ ಬಳಕೆಯಾಗುತ್ತಿರುವುದು ವಿಶೇಷ. ಇವೆರಡು ವೇದಿಕೆಗಳಷ್ಟೇ ಅಲ್ಲದೆ ಇನ್ಸ್ಟಾಗ್ರಾಮ್, ಟ್ವಿಟರ್, ಲಿಂಕ್ಡ್ಇನ್, ಹೆಲೋ ಮುಂತಾದ ವೇದಿಕೆಗಳಲ್ಲೂ ಆಧ್ಯಾತ್ಮಕ್ಕೆ ಸಂಬಂಧಿಸಿದ ಖಾತೆಗಳು-ಪುಟಗಳು ಸಾಕಷ್ಟು ಹೆಸರುಮಾಡಿವೆ.
ಇಷ್ಟೆಲ್ಲ ಜನರು ಆಸಕ್ತರಾಗಿದ್ದಾರೆ ಎಂದೇ ಈ ಕ್ಷೇತ್ರದಲ್ಲಿ ಕೆಲವು ನವೋದ್ಯಮಗಳೂ (ಸ್ಟಾರ್ಟಪ್) ಪ್ರಾರಂಭವಾಗಿವೆ. ಧ್ಯಾನ, ಪ್ರಾಣಾಯಾಮ, ಯೋಗಾಭ್ಯಾಸಗಳಿಂದ ಪ್ರಾರಂಭಿಸಿ ಅವೆಲ್ಲವೂ ಸೇರಿದ ಸಂಪೂರ್ಣ ಫಿಟ್ನೆಸ್ ಪ್ಯಾಕೇಜುಗಳವರೆಗೆ ಈ ನವೋದ್ಯಮಗಳು ಹಲವು ವಿಧದ ಸೇವೆಗಳನ್ನು ಒದಗಿಸುತ್ತಿರುವುದು ವಿಶೇಷ.
ಹೀಗೆ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಈಗಾಗಲೇ ಹಲವು ವಿಧಗಳಲ್ಲಿ ಬಳಸುತ್ತಿದ್ದ ಈ ಕ್ಷೇತ್ರ ಡಿಜಿಟಲ್ ಜಗತ್ತಿಗೆ ಇನ್ನಷ್ಟು ಹತ್ತಿರವಾಗಿದ್ದು ಕೋವಿಡ್-೧೯ ತಂದುಕೊಟ್ಟ ಲಾಕ್ಡೌನ್ ಸಂದರ್ಭದಲ್ಲಿ. ಓಡಾಟದ ಮೇಲಿನ ನಿಷೇಧದಿಂದ ನೇರ ತರಗತಿಗಳನ್ನು ನಡೆಸಲು ಸಾಧ್ಯವಾಗದಿದ್ದಾಗ, ಇನ್ನಿತರ ಕ್ಷೇತ್ರಗಳಂತೆ ಇಲ್ಲಿಯೂ ಆನ್ಲೈನ್ ತರಗತಿಗಳು ಪ್ರಾರಂಭವಾದವು. ಫೇಸ್ಬುಕ್ ಲೈವ್, ಯೂಟ್ಯೂಬ್ ಲೈವ್, ಗೂಗಲ್ ಹ್ಯಾಂಗೌಟ್ಸ್, ಜ಼ೂಮ್ ಮುಂತಾದ ಸವಲತ್ತುಗಳಷ್ಟೇ ಅಲ್ಲದೆ ವಾಟ್ಸಾಪ್ ವೀಡಿಯೋ ಕಾಲ್ನಂತಹ ಚಿರಪರಿಚಿತ ಮಾರ್ಗಗಳೂ ಆಸಕ್ತರ ನೆರವಿಗೆ ಬಂದವು.
ಈಗಾಗಲೇ ಕಲಿಯುತ್ತಿದ್ದವರಿಗೆ ಮುಂದಿನ ವಿಷಯಗಳನ್ನು ತಲುಪಿಸುವುದಷ್ಟೇ ಅಲ್ಲದೆ, ಲಾಕ್ಡೌನ್ ಸಂದರ್ಭದಲ್ಲಿ ಹೊಸತೇನಾದರೂ ಮಾಡಬೇಕು ಅಂದುಕೊಂಡವರಿಗೂ ಈ ಮಾರ್ಗಗಳು ತೆರೆದುಕೊಂಡಿದ್ದು ವಿಶೇಷ. ಕೋವಿಡ್-೧೯ರ ಸಂದರ್ಭದಲ್ಲಿ ಬೇರೆಬೇರೆ ವಿಷಯಗಳಿಗೆ ಸಂಬಂಧಪಟ್ಟ ವೆಬಿನಾರ್ಗಳು ದೊಡ್ಡಸಂಖ್ಯೆಯಲ್ಲಿ ನಡೆದದ್ದು ನಮಗೆಲ್ಲ ಗೊತ್ತೇ ಇದೆ. ಇದೇ ಸಂದರ್ಭದಲ್ಲಿ 'ಆನ್ಲೈನ್ ಬ್ರೆತ್ ಆಂಡ್ ಮೆಡಿಟೇಶನ್ ಪ್ರೋಗ್ರಾಮ್', 'ಪ್ರಾಣಾಯಾಮ ಪ್ರಾಕ್ಟೀಸ್', 'ಪವರ್ ಯೋಗ' ಮುಂತಾದ ಕಾರ್ಯಕ್ರಮಗಳೂ ಶುರುವಾಗಲು ಮಾಹಿತಿ ತಂತ್ರಜ್ಞಾನದ ಅದೇ ಸವಲತ್ತುಗಳು ನೆರವಾಗಿವೆ. ಇಂಟರ್ನೆಟ್ ಸಂಪರ್ಕವಿರುವ ಮೊಬೈಲ್ ಇದೆಯೆಂದ ತಕ್ಷಣ ಅದು ಲೇಟೆಸ್ಟ್ ವೆಬ್ ಸೀರೀಸ್ ನೋಡಲಷ್ಟೇ ಬಳಕೆಯಾಗಬೇಕು ಎಂದೇನೂ ಇಲ್ಲ, ಮನಃಶಾಂತಿಯ ಹುಡುಕಾಟಕ್ಕೂ ಅದು ಮಾರ್ಗದರ್ಶನ ಮಾಡಬಹುದೆಂದು ತೋರಿಸಿಕೊಟ್ಟಿವೆ.
Thursday, January 16, 2020
ಗಣರಾಜ್ಯೋತ್ಸವ ದಿನ – 10 ವಿಷಯ ನಿಮ್ಮarticle
ದೇಶಭಕ್ತಿಯು ಕಾಲೋಚಿತ ಅಥವಾ ವಯಸ್ಸಿನ ಮೇಲೆ ಅವಲಂಬಿತವಾಗಿರುವ ವಿಷಯವಲ್ಲ. ನಮ್ಮ ಮಕ್ಕಳು ಸ್ವತಂತ್ರ ನಾಗರಿಕರಾಗಿ ಬೆಳೆಯಲು, ನಮ್ಮ ದೇಶವನ್ನು ಸ್ವತಂತ್ರಗೊಳಿಸುವುದಕ್ಕಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಪಟ್ಟಿರುವ ಶ್ರಮ, ತ್ಯಾಗ ಹಾಗು ಕಷ್ಟಗಳ ಜ್ಞಾನವನ್ನು ನಾವು ಅವರಿಗೆ ತಿಳಿಸಿಕೊಡಬೇಕು. ಅವರು ಸ್ವಾತಂತ್ರ್ಯ ಚಳುವಳಿ ಮತ್ತು ಹೋರಾಟದ ಬಗ್ಗೆ ಆವಶ್ಯಕವಾಗಿ ತಿಳಿದುಕೊಳ್ಳಬೇಕಾಗಿದೆ. ನಮ್ಮ ದೇಶದ ಸ್ವಾತಂತ್ರ್ಯ ಯೋಧರು ಮತ್ತು ಮುಖಂಡರು ಭಾರತವನ್ನು ಬಹಳಷ್ಟು ಪ್ರಯತ್ನ ಹಾಗು ಹೋರಾಟಗಳನ್ನು ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ನಿಮ್ಮ ಮಕ್ಕಳು ಇದರ ಬಗ್ಗೆ ತಿಳಿದುಕೊಳ್ಳಲು ತುಂಬಾ ಚಿಕ್ಕವರು ಎಂದು ಭಾವಿಸಬೇಡಿ. ಇದನ್ನು ನಮ್ಮ ಮಕ್ಕಳಿಗೆ ಗಣರಾಜ್ಯೋತ್ಸವ ಸಂಧರ್ಭದಲ್ಲಿ ತಿಳಿಸುವ ಪ್ರಯತ್ನ ಮಾಡೋಣ.1. ಗಣರಾಜ್ಯ/ ತಂತ್ರ ಎಂದರೇನು ?
ಗಣರಾಜ್ಯ / ರಿ ಪಬ್ಲಿಕ್– ಎಂದರೆ ಎಲ್ಲಾ ವಿಷಯಗಳು ಸಾರ್ವಜನಿಕವಾಗಿರುವುದು (ಪಾರದರ್ಶಕವಾಗಿರುವುದು ). ಅಂದರೆ ಒಂದು ಗಣರಾಜ್ಯ ದೇಶದಲ್ಲಿ ಸರ್ಕಾರ ಜನರಿಂದ ರಚನೆಯಾಗಿರುತ್ತದೆ, ಜನರ ಎಲ್ಲಾ ವಿಷಯಗಳನ್ನು ಪರಿಗಣಿಸುವುದರ ಮೂಲಕ ಕಾಳಜಿ ವಹಿಸಲಾಗುತ್ತದೆ. ಗಣರಾಜ್ಯ ರಾಷ್ಟ್ರವನ್ನು ರಾಜನು ಆಳುವುದಿಲ್ಲ.ಆಡಳಿತ ರಾಜನ ಆಳ್ವಿಕೆಗಿಂತ ಉತ್ತಮವಾಗಿರುತ್ತದೆ.2. ಗಣರಾಜ್ಯೋತ್ಸವ ದಿನ ಏನನ್ನು ಸೂಚಿಸುತ್ತದೆ?
3. ದಿನಾಂಕ
- ಭಾರತವು ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.
- 1930 ರಲ್ಲಿ ಭಾರತ ಸರ್ಕಾರದ ಕಾಯಿದೆ ಬದಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ರಚಿಸಲಾದ ಭಾರತದ ಆಡಳಿತ ಕಾಯಿದೆಯ ದಾಖಲೆಯ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಯಿತು.
- 1950 ರಲ್ಲಿ ಪೂರ್ಣಸ್ವಾರಾಜ್ ಎಂದು ಘೋಷಿಸಲಾಯಿತು ಹೀಗಾಗಿ 26 ನೇ ಜನವರಿ ರಾಷ್ಟ್ರೀಯ ರಜಾದಿನವಾಗಿ ಘೋಷಿಸಲಾಗಿದೆ.
4. ಸಂವಿಧಾನ ಎಂದರೇನು?
ಸಂವಿಧಾನವೆಂದರೆ ಭಾರತದ ಎಲ್ಲಾ ನಾಗರಿಕರು ಅನುಸರಿಸಬೇಕಾದ ಮೂಲಭೂತ ನಿಯಮ ಮತ್ತು ಹಕ್ಕುಗಳ ಸ್ಥಾಪನೆಗೆ ರಚಿಸಲಾಗಿರುವ ಕಾಯಿದೆ. ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಇಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿರುವುದು.5. ಸಂವಿಧಾನವನ್ನು ರಚಿಸಿದವರು ಯಾರು?

- ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದವರು.
- ಭಾರತೀಯ ಸಂವಿಧಾನವು ವಿಶ್ವದ ಅತಿ ಉದ್ದವಾದ ಸಂವಿಧಾನವಾಗಿದ್ದು, ಇದರಲ್ಲಿ 22 ಭಾಗಗಳಲ್ಲಿ, 12 ವಿವರ ಪಟ್ಟಿ ಮತ್ತು 97 ತಿದ್ದುಪಡಿಗಳಾಗಿ ವಿಂಗಡಿಸಲಾಗಿರುವ 448 ಲೇಖನಗಳನ್ನು ಒಳಗೊಂಡಿದೆ.

- ಸಂಸತ್ತಿನ ಗ್ರಂಥಾಲಯದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕೈ ಬರಹದಲ್ಲಿರುವ ಕ್ಯಾಲಿಗ್ರಫೆಡ್ ಪ್ರತಿಗಳನ್ನು ಸಂರಕ್ಷಿಸಲಾಗಿದೆ.
- ಅವುಗಳನ್ನು ಹೀಲಿಯಂ ತುಂಬಿರುವ ಪೆಟ್ಟಿಗೆಯಲ್ಲಿ ಇರಿಸಲಾಗಿದೆ.
6. ಭಾರತದ ವಿವಿಧ ಸಂಸ್ಕೃತಿಯ ಪ್ರದರ್ಶನ

- ಗಣರಾಜ್ಯೋತ್ಸವದಿನದಂದು ದೆಹಲಿಯ ರಾಜ್ ಪಥ್ ನಲ್ಲಿ ಜಗತ್ಪ್ರಸಿದ್ಧ ರಾಷ್ಟ್ರೀಯ ಪರೇಡ್ ನಡೆಯುತ್ತದೆ.
- ಸೈನ್ಯ, ವಾಯುಪಡೆ ಮತ್ತು ನೌಕಾಪಡೆ ನಮ್ಮ ಭಾರತ ದೇಶದ ಸಾಮರ್ಥ್ಯವನ್ನು ತೋರಿಸುತ್ತಾರೆ.

- ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರದರ್ಶಿಸಲಾಗುವುದು. ಪ್ರಪಂಚಕ್ಕೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಎಲ್ಲಾ ರಾಜ್ಯಗಳ ಟ್ಯಾಬ್ಲಾಯ್ಡ್ಗಳ ಮೂಲಕ ತೋರಿಸಲಾಗುವುದು.
7. ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ ದಿನಾಚರಣೆಯಲ್ಲಿರುವ ವ್ಯತ್ಯಾಸವೇನು?

- ಗಣರಾಜ್ಯೋತ್ಸವವನ್ನು ಪ್ರತಿವರ್ಷವೂ ಜನವರಿ 26 ರಂದು ಪ್ರಜಾಪ್ರಭುತ್ವದ ರಾಷ್ಟ್ರವನ್ನು ಪ್ರಾರಂಭಿಸಿದ ದಿನವೆಂದು ಆಚರಿಸಲಾಗುತ್ತದೆ.
- ಪ್ರತಿವರ್ಷ ಆಗಸ್ಟ್ 15 ರಂದು ಭಾರತ ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯವನ್ನು ಪಡೆದ ದಿನವನ್ನು ಸ್ವಾತಂತ್ರ್ಯ ದಿನವೆಂದು ಆಚರಿಸುತ್ತೇವೆ.
8. ಆಚರಣೆಗಳು

- ದೆಹಲಿಯ ರಾಜ್ಪಥ್ ನಲ್ಲಿ ನಮ್ಮ ಸಶಸ್ತ್ರ ಪಡೆಗಳಾದ ಆರ್ಮಿ, ಏರ್ ಫೋರ್ಸ್ ಮತ್ತು ನೌಕಾಪಡೆ ಪರೇಡ್ ನೋಡಲು ಆಕರ್ಷಕವಾಗಿರುತ್ತದೆ.
- ಇತರ ದೇಶಗಳಿಂದ ಆಹ್ವಾನಿತರಾದ ಅತಿಥಿಗಳಿಗೆ ಗೌರವ ಸಲ್ಲಿಸಲಾಗುವುದು.
- ಭಾರತದ ಅಧ್ಯಕ್ಷರು ಸರ್ಕಾರ ಆಯೋಜಿಸಿದ ಗಣರಾಜ್ಯೋತ್ಸವಕ್ಕೆ ವಂದಿಸುವರು.
9. ಗಣರಾಜ್ಯೋತ್ಸವದಂದು ನೀಡಲಾಗುವ ಪ್ರಶಸ್ತಿಗಳು

- ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ನೀಡಲಾಗುವುದು.

- ಮೊದಲನೆಯ ಅತ್ಯುನ್ನತ ಕ್ರಮದಲ್ಲಿ ನಾಗರಿಕರಿಗೆ ಭಾರತ ರತ್ನವನ್ನು ಅಸಾಧಾರಣ ಸೇವೆ ಅಥವಾ ಪ್ರದರ್ಶನಕ್ಕಾಗಿ ನೀಡಲಾಗುತ್ತದೆ

- ಎರಡನೆಯ ಅತ್ಯುನ್ನತ ಕ್ರಮದಲ್ಲಿ ಪದ್ಮ ವಿಭೂಷಣವನ್ನು ಅಸಾಧಾರಣ ಸೇವೆಗಾಗಿ ನಾಗರಿಕರಿಗೆ ನೀಡಲಾಗುತ್ತದೆ.
- ಮೂರನೇ ಉನ್ನತ ಕ್ರಮಾಂಕದ ಪದ್ಮಭೂಷಣವನ್ನು ವಿಶೇಷ ಸೇವೆಗಾಗಿ ನಾಗರಿಕರಿಗೆ ನೀಡಲಾಗುತ್ತದೆ.
- ನಾಲ್ಕನೇ ಕ್ರಮಾಂಕದ ಪದ್ಮಶ್ರೀ ಪ್ರಶಸ್ತಿ ಪ್ರಜೆಗಳಿಗೆ ವಿಶೇಷ ಸೇವೆಗಾಗಿ ನೀಡಲಾಗುತ್ತದೆ.
10. ಗಣರಾಜ್ಯೋತ್ಸವವನ್ನು ಮಕ್ಕಳೊಂದಿಗೆ ಆಚರಿಸಲು ಉಪಯುಕ್ತ ಸಲಹೆಗಳು :

- ಮಕ್ಕಳನ್ನು ಬೆಳಗ್ಗೆ ಬೇಗ ಎಚ್ಚರಗೊಳಿಸಿ ಮಕ್ಕಳ ಜೊತೆ ದೂರದರ್ಶನದಲ್ಲಿ ಪ್ರಸಾರವಾಗುವ ಲೈವ್ ಗಣರಾಜ್ಯೋತ್ಸವ ಪೆರೇಡ್ ನ ವೀಕ್ಷಿಸಬಹುದು.
- ಶಾಲೆಗೆ ರಜಾ ಘೋಷಿಸಿದ್ದರೆ, ಧ್ವಜಾರೋಹಣ ನಡೆಯುತ್ತಿರುವ ಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಬಹುದು.

- ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ಕಥೆಗಳನ್ನು ಹೇಳಬಹುದು.
- ಸ್ವಾತಂತ್ರ್ಯ ಹೋರಾಟಗಾರರಂತೆ ವಸ್ತ್ರಗಳನ್ನು ಧರಿಸಿ ಅವರ ಬಗ್ಗೆ ತಿಳಿಸಿ ಹೇಳಬಹುದು.
- ಪುಟ್ಟ ವಯಸ್ಸಿನಲ್ಲಿ ದೇಶಭಕ್ತಿಯ ಅರಿವು ಮೂಡಿಸಲು ಹುತಾತ್ಮರಿಗೆ ವಂದನೆ ಸಲ್ಲಿಸಬಹುದು.
Monday, January 13, 2020
1. ಆಮ್ಲಜನಕ - O₂
2. ಸಾರಜನಕ - N₂
3. ಹೈಡ್ರೋಜನ್ - H₂
4. ಕಾರ್ಬನ್ ಡೈಆಕ್ಸೈಡ್ - CO₂
5. ಕಾರ್ಬನ್ ಮಾನಾಕ್ಸೈಡ್ - ಸಿಒ
6. ಸಲ್ಫರ್ ಡೈಆಕ್ಸೈಡ್ - SO₂
7. ಸಾರಜನಕ ಡೈಆಕ್ಸೈಡ್ - NO₂
8. ಸಾರಜನಕ ಮಾನಾಕ್ಸೈಡ್ (ನೈಟ್ರಿಕ್ ಆಕ್ಸೈಡ್) - NO
9. ಡೈನೈಟ್ರೋಜನ್ ಆಕ್ಸೈಡ್ (ನೈಟ್ರಸ್ ಆಕ್ಸೈಡ್) - N₂O
10. ಕ್ಲೋರಿನ್ - Cl₂
11. ಹೈಡ್ರೋಜನ್ ಕ್ಲೋರೈಡ್ - ಎಚ್ಸಿಎಲ್
12. ಅಮೋನಿಯಾ - NH₃
ಆಮ್ಲ
13. ಹೈಡ್ರೋಕ್ಲೋರಿಕ್ ಆಮ್ಲ - ಎಚ್ಸಿಎಲ್
14. ಸಲ್ಫ್ಯೂರಿಕ್ ಆಮ್ಲ - H₂SO₄
15. ನೈಟ್ರಿಕ್ ಆಮ್ಲ - HNO₃
16. ಫಾಸ್ಪರಿಕ್ ಆಮ್ಲ - H₃PO₄
17. ಕಾರ್ಬೊನಿಕ್ ಆಮ್ಲ - H₂CO₃
ಕ್ಷಾರ
18. ಸೋಡಿಯಂ ಹೈಡ್ರಾಕ್ಸೈಡ್ - NaOH
19. ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ - ಕೆಒಹೆಚ್
20. ಕ್ಯಾಲ್ಸಿಯಂ ಹೈಡ್ರಾಕ್ಸೈಡ್ - Ca (OH)
ಉಪ್ಪು
21. ಸೋಡಿಯಂ ಕ್ಲೋರೈಡ್ - NaCl
22. ಕಾರ್ಬೊನೇಟ್ ಸೋಡಿಯಂ - Na₂CO₃
23. ಕ್ಯಾಲ್ಸಿಯಂ ಕಾರ್ಬೊನೇಟ್ - CaCO₃
24. ಕ್ಯಾಲ್ಸಿಯಂ ಸಲ್ಫೇಟ್ - CaSO₄
25. ಅಮೋನಿಯಂ ಸಲ್ಫೇಟ್ - (NH₄)₂SO₄
26. ನೈಟ್ರೇಟ್ ಪೊಟ್ಯಾಸಿಯಮ್ - KNO₃
@studykpsc
27. ಚಾಕ್ - ಕ್ಯಾಲ್ಸಿಯಂ ಕಾರ್ಬೊನೇಟ್ - CaCO₃
28. ದ್ರಾಕ್ಷಿಹಣ್ಣು - ಗ್ಲೂಕೋಸ್ - C6H₁₂O6
29. ಆಲ್ಕೋಹಾಲ್ - C₂H5 OH
30. ಕಾಸ್ಟಿಕ್ ಪೊಟ್ಯಾಶ್ - ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ - KoH
31. ಸೋಡಾ ತಿನ್ನುವುದು - ಸೋಡಿಯಂ ಬೈಕಾರ್ಬನೇಟ್ - NaHCO₃
32. ಸುಣ್ಣ - ಕ್ಯಾಲ್ಸಿಯಂ ಆಕ್ಸೈಡ್ - CaO
33. ಜಿಪ್ಸಮ್ - ಕ್ಯಾಲ್ಸಿಯಂ ಸಲ್ಫೇಟ್ - CaSO₄.2H₂O
34. ಟಿ.ಎನ್.ಟಿ. - ಟ್ರೈ ನೈಟ್ರೋ ಟ್ಯಾಲಿನ್ - C6H₂CH₃ (NO₂)
35. ಸೋಡಿಯಂ ಕಾರ್ಬೊನೇಟ್ Na₂CO₃
36. ನೀಲಿ ಥಾಥ್ - ತಾಮ್ರದ ಸಲ್ಫೇಟ್ - CuSO₄
37. ಮೋಲಾರ್ - ಅಮೋನಿಯಂ ಕ್ಲೋರೈಡ್ - NH₄Cl
38. ಆಲಮ್ - ಪೊಟ್ಯಾಸಿಯಮ್ ಅಲ್ಯೂಮಿನಿಯಂ ಸಲ್ಫೇಟ್ - K₂SO₄Al₂ (SO₄) ₃.24H₂O
39. ತಣಿಸಿದ ಸುಣ್ಣ - ಕ್ಯಾಲ್ಸಿಯಂ ಹೈಡ್ರಾಕ್ಸೈಡ್ - Ca (OH)
40. ಪಿಷ್ಟ - ಪಿಷ್ಟ - C6 H 10 O 5
41. ನಗುವ ಅನಿಲ - ನೈಟ್ರಸ್ ಆಕ್ಸೈಡ್ - N₂O
42. ಪೊಟ್ಯಾಸಿಯಮ್ ಪರ್ಮಾಂಗನೇಟ್ - KMnO₄
43. ಕೆಂಪು ವರ್ಮಿಲಿಯನ್ - ಸೀಸದ ಪ್ಯಾರಾಕ್ಸೈಡ್ - Pb₃O₄
44. ಡ್ರೈ ಐಸ್ - ಘನ ಕಾರ್ಬನ್-ಡಯ್-ಆಕ್ಸೈಡ್ - CO₂
45. ಪೊಟ್ಯಾಸಿಯಮ್ ನೈಟ್ರೇಟ್ - KNO₃
46. ವಿನೆಗರ್ - ಅಸಿಟಿಕ್ ಆಮ್ಲದ ದ್ರಾವಣವನ್ನು ದುರ್ಬಲಗೊಳಿಸಿ - CH₃COOH
47. ಸುಹಾಗಾ - ಬೊರಾಕ್ಸ್ - Na₂B₄O7.10H₂O
48. ಸ್ಪಿರಿಟ್ - ಮೀಥೈಲ್ ಆಲ್ಕೋಹಾಲ್ - CH₃OH
49. ಸ್ಲೇಟ್ - ಸಿಲಿಕಾ ಅಲ್ಯೂಮಿನಿಯಂ ಆಕ್ಸೈಡ್ - Al₂O₃2SiO₂.2H₂O
50. ಗ್ರೀನ್ ಕೇಸ್ - ಫೆರಿಕ್ ಸಲ್ಫೇಟ್ - Fe₂ (SO₄)





